ಚಿತ್ತ

ನೀಲಾಕಾಶದ ನಕ್ಷತ್ರಗಳ ಲೋಕ
ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು
ಮಿನುಗಿದೊಡೆ ಮತ್ತೊಂದು ಮಿನುಗಿ
ಹೇಳಲಾಗದ ಮಾತಿನ ಆಳದ ಕ್ಷಣಗಳು

ನೀಲ ಕಡಲ ರಾಶಿಯ ಅಲೆಗಳಲಿ
ಮುಳುಗಿ ತೇಲಿ ಜಿಗಿದು ಬದುಕಿನ
ಮೀನ ಹಿಂಡು ಭೇದ ಇರದ ಚಿತ್ತ
ಒಲವಿನ ಮುತ್ತುಗಳಾಗುವ ಸಮಯ

ಹಣತೆಯ ಒಲವಿನಲಿ ತೇಲಿ
ನೀಲ ಪ್ರಭೇ ಒಳ ಹೊರಗೂ
ಬೆಳಕು ಸಂಭ್ರಮಿಸಿದ ಚಿತ್ತ
ದೇವರ ಮನೆ ನಂದಾದೀಪ ಉರಿವ ಸಂಜೆ

ಹೂವ ಮೇಲೆ ಕುಳಿತ ಚಿಟ್ಟೆ
ಚಿತ್ತ ಭಾರ ಗಾಳಿಗೆ ಹರಿದಾಡಿ
ಎಳೆಯ ಚಿಗುರು ಹಸಿರು ಚಿಮ್ಮಿ
ಬಳ್ಳಿಯ ತುಂಬ ಬಿಳಿಮೊಗ್ಗು ಬಿರಿಯುವ ಮುಂಜಾವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸು ನನಸುಗಳೆಲ್ಲ
Next post ರಾಸಲೀಲೆ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys